ರಾಧಕೃಷ್ಣರ ಸನ್ನಿಧಿಯಲ್ಲಿ ?ವೈದೇಹಿ?ಗೆ ಚಾಲನೆ
Posted date: 02 Wed, Nov 2011 ? 08:48:34 AM

ಕೀರ್ತಿಲಕ್ಷ್ಮೀ ಫ಼ಿಲಂಸ್ ಲಾಂಛನದಲ್ಲಿ ಎಂ.ಎನ್.ವರದರಾಜು ಅವರು ನಿರ್ಮಿಸುತ್ತಿರುವ ‘ವೈದೇಹಿ ಚಿತ್ರ ಕಳೆದವಾರ ಸಂಜಯನಗರದ ರಾಧಕೃಷ್ಣ ದೇವಸ್ಥಾನದಲ್ಲಿ ಆರಂಭವಾಯಿತು. ನಾಯಕ ನಾಯಕಿಯ ಬಳಿ ಪ್ರೀತಿಯ ವಿಷಯ ಹೇಳಿ ಕೊಳ್ಳುವ  ಪ್ರಥಮ ಸನ್ನಿವೇಶಕ್ಕೆ ಪ್ರಚಾರಕಲೆಯಲ್ಲಿ ಗುರುತಿಸಿಕೊಂಡಿರುವ ಶ್ರೀಕಾಂತ್ ಆರಂಭ ಫಲಕ ತೋರಿದರು. ಸುರೇಂದ್ರ ಗೌಡ ಕ್ಯಾಮೆರಾ ಚಾಲನೆ ಮಾಡಿದರು.  
     ಮಹರ್ಷಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ನವಂಬರ್ ಒಂಭತ್ತರಿಂದ ಒಂದೇ ಹಂತದ ಚಿತ್ರೀಕರಣ ನಡೆಯಲಿದೆ. ಎರಡು ಹಾಡುಗಳಿರುವ ಈ ಚಿತ್ರಕ್ಕೆ ಸಾಗರ್ ಭೂಷಣರ  ಸಂಗೀತ ನಿರ್ದೇಶನವಿದೆ.
     ನವೀನ್‌ಕೃಷ್ಣ ಮತ್ತು ನಿತಿನ್(ಮಾಗಡಿ) ನಾಯಕರಾಗಿ ಅಭಿನಯಿಸುತ್ತಿರುವ ಈ ಚಿತ್ರದ ನಾಯಕಿ ದಿಶಾ ಪೂವಯ್ಯ. ಶಂಕರ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಅರವಿಂದ್ ಅವರ ನೃತ್ಯ ನಿರ್ದೇಶನ ಹಾಗೂ ಬಾಬುಖಾನ್ ಕಲಾನಿರ್ದೇಶನವಿದೆ. 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed